Координаты :12 ° 48′20 ″ с.ш., 76 ° 26′51 ″ в.д. / 12.805555 ° с.ш. 76.447635 ° в.
Сасалу
ಶ್ರೀಕ್ಷೇತ್ರದ ಮಹಿಮೆಗಳು
೧) ನಾಗರ ದೋಷ ನಿವಾರಣೆ
೨) ಚರ್ಮ ಸಂಬಂಧಿ ಕಾಯಿಲೆಗಳಿಗೆ ಶ್ರೀ ಕ್ಷೇತ್ರದಲ್ಲಿರುವ ಕಲ್ಯಾಣಿಯಲ್ಲಿ ಮೂರು ಬಾರಿ ಸ್ನಾನ ಮಾಡಿದರೆ ಚರ್ಮ ಸಂಬಂಧಿತ ಕಾಯಿಲೆಗಳು ನಿವಾರಣೆಯಾಗುತ್ತದೆ.
೩) ಹಾವು ಕಚ್ಚಿದ ವ್ಯಕ್ತಿಗಳಿಗಳು ತಕ್ಷಣ ಬಂದು ಈ ದೇವಾಲಯದಲ್ಲಿ ಪ್ರಸಾದವನ್ನು ಸ್ವೀಕರಿಸಿದರೆ ವಿಷವುನಾಶವಾಗುವುದು.
೪) ಮಕ್ಕಳಾಗದ ದಂಪತಿಗಳಿಗೆ ಶ್ರೀಕ್ಷೇತ್ರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರೆ ಮಕ್ಕಳಾಗುವ ಯೋಗ್ಯ ಬರುತ್ತದೆ.
೫) ನಾಗರ ದೋಷ ಇದ್ದರೆ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರೆ ನಾಗರ ದೋಷ ನಿವಾರಣೆ ಆಗುತ್ತದೆ.
ಮಂಡ್ಯಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಸಾಸಲು ಊರಿನಲ್ಲಿ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ಎಂಬ ಎರಡು ದೇವಾಲಯಗಳಿವೆ. ಇವು ಈಗ ಮುಜರಾಯಿ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಇಲ್ಲಿ ಸಪ್ತಮಾತೃಕೆಯರು ಹಾಗೂ ಗ್ರಾಮ ದೇವತೆ ಕುದುರೆ ಮಂಡಮ್ಮನ ವಿಗ್ರಹಗಳಿವೆ.
ಸಾಸಲು ಊರಿನ ಉತ್ತರಕ್ಕೆ ಸೋಮಲಿಂಗೇಶ್ವರ ದೇವಾಲಯವಿದ್ದು, ಅದು ಪೂರ್ವಾಭಿಮುಖವಾಗಿದೆ. ಇದು ವಿನಯಾದಿತ್ಯನ ಕಾಲದಲ್ಲಿ ನಿರ್ಮಿತವಾಯಿತೆಂದು ತಿಳಿಯಲಾಗಿದೆ. ಶಾಸನಗಳ ಆಧಾರವೇನೂ ಇಲ್ಲ. ಊರಿನ ಜನರು ಆಸಕ್ತಿವಹಿಸಿ ಇದ್ದಷ್ಟನ್ನು ಚೆನ್ನಾಗಿ ಇಟ್ಟುಕೊಂಡಿರುವುದರಿಂದ ಈಗಿರುವ ರೀತಿಯಲ್ಲಾದರೂ ಇದೆ. ದೇವಾಲಯದ ಗೋಡೆಗಳಿಗೆ ಅನೇಕ ವರ್ಷಗಳಿಂದ ಸುಣ್ಣಬಳಿದಿರುವುದರಿಂದ ಭಿತ್ತಿಯ ಮೂಲಸ್ವರೂಪವೇನೂ ಗೋಚರವಾಗುವಂತಿಲ್ಲ. ಆಗಾಗ್ಗೆ ಇಟ್ಟಿಗೆ ಮತ್ತು ಗಾರೆಗಳಿಂದ ದುರಸ್ತುಗೊಂಡಿರುವುದರಿಂದ, ಫಾಂಸನ ಶೈಲಿಯ ಶಿಖರವು ಸ್ಪಷ್ಟವಾಗಿ ಕಾಣುವಂತಿದೆ.
ಒಳಗಿನ ಭಾಗದಲ್ಲಿ ಹೊಯ್ಸಳ ದೇಗುಲಗಳ ಎಲ್ಲ ಲಕ್ಷಣಗಳೂ ಕಾಣಿಸುತ್ತದೆ. ಚೌಕಾಕಾರದ ಗರ್ಭಗೃಹದಲ್ಲಿ ವಿತಾನವಿದೆ. ಅದರಲ್ಲಿ ಪದ್ಮಮಂಡಲವಿದೆ. ಲಲಾಟದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ಬಾಗಿಲುವಾಡವೂ ಸರಳವಾಗಿದೆ. ನವರಂಗದಲ್ಲಿ ನಾಲ್ಕು ಬ್ರಹ್ಮಕಾಂತ ಶೈಲಿಯ ಕಂಬಗಳಿವೆ. ನಂದಿಯ ಉಬ್ಬುಶಿಲ್ಪವಿದೆ. ಇಲ್ಲಿನ ಬಾಗಿಲವಾಡವನ್ನು ಪುನಾರಚಿಸಲಾಗಿದೆ. ಇಟ್ಟಿಗೆ ಗಾರೆಯ ಬಳಕೆಯಾಗಿವೆ.
ಇವಿಷ್ಟು ಐತಿಹಾಸಿಕ ಮಾಹಿತಿಗಳಾದರೆ, ಇಲ್ಲಿನ ಸಾಂಪ್ರದಾಯಿಕ ಆಚರಣೆಯೊಂದು ಆಸಕ್ತಿಕರವಾಗಿದೆ. ಪ್ರತಿವರ್ಷದ ಕಾರ್ತಿಕ ಮಾಸದ ಮೊದಲ ಸೋಮವಾರದಂದು ಮಾನಿಗಸೆಟ್ಟಿಯ ಮೆರವಣಿಗೆ ನಡೆಯುತ್ತದೆ. ಆ ಸಂದರ್ಭದಲ್ಲಿ ಸಗಣಿ ಉಂಡೆಗಳನ್ನು ಎರಚಾಡುತ್ತ ನಡೆಸುವ ಹೋಳಿಯ ಸಂಪ್ರದಾಯವಿದೆ. ಇದರ ಹಿನ್ನೆಲೆ ಹೀಗಿದೆ.
ಹಿಂದೆ ಇಲ್ಲಿದ್ದ ಜೈನ ಮತ್ತು ಶೈವರಲ್ಲಿ ಭೈರವರಾಜ ಹಾಗೂ ಸೋಮೇಶ್ವರರ ನಡುವೆ ಭಿನ್ನಾಭಿಪ್ರಾಯವುಂಟಾಯಿತು. (ಒಂದೆಡೆ ಹೀಗೆ ಹೇಳಿದ್ದರೆ, ಮತ್ತೊಂದೆಡೆ ಇದು ಕುರುಬರು ಮತ್ತು ವೀರಶೈವರ ನಡುವೆ ನಡೆದ ವಿವಾದ ಎಂದು ಹೇಳಲಾಗುತ್ತದೆ) ಇದಕ್ಕೊಂದು ನಿಲುಗಡೆ ತರಲು ಗ್ರಾಮಸ್ಥರು ಭೈರವ ನಡುವೆ ಕಾಳಗ ನಡೆದು ಅದರಲ್ಲಿ ಸೋಲು ಅನುಭವಿಸಿದವರು ಕತ್ತೆಯ ಮೇಲೆ ಕುಳಿತು ಮೆರವಣಿಗೆ ಬರಬೇಕು ಎಂದು ತೀರ್ಮಾನಿಸಿದರು.
ಹಾಗೆ ನಡೆದ ಕಾಳಗದಲ್ಲಿ ಭೈರವನು ವಿಜಯಿಯಾಗಿದ್ದರಿಂದ, ಸೋಮೇಶ್ವರನು ಕತ್ತೆ ಸವಾರಿ ಮಾಡುವಂತಾಯಿತು. ಆದರೆ ಈ ವಿಜಯವು ಭೈರವನಿಗೆ ಹಿತವೆನಿಸಲಿಲ್ಲ. ಆತನು ಮನನೊಂದವನಾಗಿ ಕೈಲಾಸವನ್ನು ಸೇರಿದನೆಂದು ಕಥೆ. ಆತನು ಸೋಮೇಶ್ವರನನ್ನು ಕರೆದೊಯ್ಯಲು ಬರುವನೆಂಬ ನಿರೀಕ್ಷೆಯಲ್ಲಿ ಆತನ ವಾಹನ ನಂದಿಯು ಕತ್ತು ಎತ್ತಿ ಆಗಸದತ್ತ ನೋಡುತ್ತಿರುವನು ಎಂಬಂತಿರುವ ಶಿಲ್ಪವು ಆಕರ್ಷಕವಾಗಿದೆ.
ಈ ವಿವಾದದ ಹಿನ್ನೆಲೆಗೆ ರೂಪಿಸಿದ ಒಂದು ದೃಶ್ಯರೂಪಕವು ಇಂದಿಗೂ ಚಾಲ್ತಿಯಲ್ಲಿದೆ. ಅದರಂತೆ ಭೈರವ ಹಾಗೂ ಸೋಮೇಶ್ವರನ ಅನುಯಾಯಿಗಳು ಸಗಣಿಯ ಉಂಡೆಗಳನ್ನು ಪರಸ್ಪರ ಎರಚಾಡುತ್ತ ಯುದ್ಧದಲ್ಲಿ ತೊಡಗುವರು. ಇದರಲ್ಲಿಯೂ ಭೈರವನ ಪಂಥದವರೇ ಜಯಗಳಿಸುವರು. ಸೋಮೇಶ್ವರನ ಅರ್ಚಕನು ತಲೆ ಬೋಳಿಸಿಕೊಂಡು ಕತ್ತೆಯ ಮೇಲೆ ಕುಳಿತು ಮೆರವಣಿಗೆ ಹೊರಡುವನು.
ಸಗಣಿಯ ಎರಚಾಟದಿಂದಾಗಿ ಚರ್ಮರೋಗಗಳು ಗುಣವಾಗುತ್ತದೆಂಬ ನಂಬಿಕೆಯಿದೆ. ಗ್ರಾಮೀಣ ನಂಬಿಕೆಗಳು ನಶಿಸುತ್ತಿರುವ ಈ ದಿನಗಳಲ್ಲೂ ಇಲ್ಲಿ ಪ್ರಾಚೀನ ಆಚರಣೆಗಳು ಮುಂದುವರೆಯುತ್ತಿವೆ. ಗ್ರಾಮೀಣ ಸೊಗಡನ್ನು ಜೀವಂತವಾಗಿಟ್ಟಿವೆ.
ಈ ಕಥಾನಕದ ದೃಶ್ಯಗಳ ಚಿತ್ರಗಳು ಹಾಗೂ ಸ್ಥಳೀಯ ಇತಿಹಾಸವನ್ನು ಬಿಂಬಿಸುವ ಕೆಲವಾರು ಲೇಖನಗಳನ್ನು ಸಂಗ್ರಹಿಸಿ ಚಿತ್ರಸಂಪುಟದಲ್ಲಿ ನೀಡಲಾಗಿದೆ. ಇದು ಆಸಕ್ತರಿಗೆ ಉಪಯುಕ್ತವಾಗುತ್ತದೆನ್ನುವುದು ಆಶಯ
Расположение: https://maps.app.goo.gl/epiDRT2WKPGKBjnp6
# ಹೊಯ್ಸಳದೇಗುಲಮಾಲಿಕೆ
ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಸಾಸಲು ಪಟ್ಟಣದ ಶಂಭುಲಿಂಗೇಶ್ವರ ದೇವಾಲಯದ ವಿವರಣೆಯಿದೆ. ಸುಮಾರು 12 ನೇ ಶತಮಾನದಲ್ಲಿ ರಚಿತವಾಗಿರುವ ಈ ದೇವಾಲಯವು ಹೊಯ್ಸಳರ ನಿರ್ಮಾಣವಾದರೂ, ಇದು ಅವರ ಆಳ್ವಿಕೆಯ ಆರಂಭಿಕ ಹಂತಗಳಲ್ಲಿ ನಿರ್ಮಿತವಾಗಿರುವುದರಿಂದ ಹೆಚ್ಚಿನ ಕಲೆಗಾರಿಕೆ ಎದ್ದುಕಾಣುವಂತಿಲ್ಲ.
ಆದರೂ ಸ್ಥಳೀಕರು ದೇವಾಲಯವನ್ನು ಚೆನ್ನಾಗಿ ಸಂರಕ್ಷಿಸಿ ಇಟ್ಟುಕೊಂಡಿರುವುದರಿಂದ ಹೆಚ್ಚಿನ ಭಾಗ ನಷ್ಟವಾಗದೇ ಮೂಲರೂಪದಲ್ಲೇ ಉಳಿಸಿಕೊಳ್ಳಲಾಗಿದೆ.
ದೇವಾಲಯದ ಗರ್ಭಗೃಹವು ಚೌಕಾಕಾರದಲ್ಲಿದೆ. ಭಿತ್ತಿಯಲ್ಲಿ ಯಾವ ಅಲಂಕರಣಗಳು ಇಲ್ಲ. ವಿತಾನದಲ್ಲಿ ಪದ್ಮಚಿಹ್ನೆಯಿದೆ. ಬಾಗಿಲವಾಡಕ್ಕೆ ಎರಡು ಶಾಖೆಗಳಿದ್ದು, ಕೆಳಗೆ ದ್ವಾರಪಾಲರಿದ್ದಾರೆ. ಅಂತರಾಳ ಮತ್ತು ನವರಂಗಗಳಲ್ಲೂ ಹೆಚ್ಚಿನ ವಿನ್ಯಾಸಗಳಿಲ್ಲ.
ಶಿವಲಿಂಗದ ಎದುರಿಗೆ ಜೋಡಿ ನಂದಿಗಳ ವಿಗ್ರಹಗಳಿವೆ. ಈ ದೇಗುಲದಲ್ಲಿ ಲಭ್ಯವಿರುವ ಶಾಸನದಲ್ಲಿ 1121 ರ ಒಂದು ಶಾಸನದಲ್ಲಿ ಭೋಗೇಶ್ವರ ದೇವರನ್ನು ಕುರಿತ ಉಲ್ಲೇಖವಿದೆ. ಭಿತ್ತಿಯಲ್ಲಿ ಹನ್ನೆರಡು ಅರ್ಧಕಂಬಗಳಿವೆ. ಸರಳವಾದ ದ್ವಾರಬಂಧದ ಹೊರಗೆ ಇರುವ ಮುಖಮಂಟಪದಲ್ಲಿ ಕದಂಬಶೈಲಿಯ ಎರಡು ಕಂಬಗಳಿವೆ.
ಸೋಮೇಶ್ವರ ದೇವಾಲಯದ ಸಂರಚನೆಯನ್ನೇ ಹೆಚ್ಚು ಮಟ್ಟಿಗೆ ಹೋಲುವ ಈ ದೇವಾಲಯದಲ್ಲಿ ಕೂಡ ಇಟ್ಟಿಗೆಯ ಮತ್ತು ಗಾರೆಯ ಬಳಕೆ ಅಧಿಕವಾಗಿದೆ. ಇದು ಊರಿನ ಹೊರಭಾಗದಲ್ಲಿ ಪ್ರಾಕೃತಿಕವಾಗಿ ಸುಂದರವಾದ ಸ್ಥಳದಲ್ಲಿದೆ. ಇಲ್ಲಿನ ಎರಡು ದೇವಾಲಯಗಳಿಗೂ ಪ್ರತಿವರ್ಷ ಸಾವಿರಾರು ಜನ ಭೇಟಿ ನೀಡುವರು.
ಬಯಲು ಸೀಮೆ ಕುಕ್ಕೆ ಸುಬ್ರಮಣ್ಯ ಖ್ಯಾತಿಯ ಶ್ರೀ ಸೋಮೇಶ್ವರ ಶ್ರೀ ದೇವಸ್ಥಾನಗಳು ಕರ್ನಾಟಕದ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿದ್ದು, ಇವು ಕೃಷ್ಣರಾಜಪೇಟೆಯಿಂದ ಸುಮಾರು 22 ಕಿ.ಮೀ, ಚನ್ನರಾಯಪಟ್ಟಣದಿಂದ 15 ಕಿ.ಮೀ ಮಂಡ್ಯದಿಂದ 61 ಕಿ.ಮೀ ಮತ್ತು ಬೆಂಗಳೂರು ನಗರದಿಂದ ಸುಮಾರು 151 ಕಿ.ಮೀ ದೂರದಲ್ಲಿದೆ.
ರೈಲ್ವೆ ನಿಲ್ದಾಣ ಮಾರ್ಗ ಶ್ರವಣಬೆಳಗೊಳ ಮತ್ತು ಮಂದಗೆರೆಯಿಂದ ತಲುಪಬಹುದು ದೇವಾಲಯದ ಪ್ರಮುಖ ದೇವರುಗಳಾದ ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ, ಮತ್ತು ಕುದುರೆಮಂಡಮ್ಮ ದೇವತೆ. ಈ ದೇವಾಲಯವನ್ನು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆ ನಿರ್ವಹಿಸುತ್ತದೆ.
ಶ್ರೀಕ್ಷೇತ್ರದ ಮಹಿಮೆಗಳು
೧) ನಾಗರ ದೋಷ ನಿವಾರಣೆ
೨) ಚರ್ಮ ಸಂಬಂಧಿ ಕಾಯಿಲೆಗಳಿಗೆ ಶ್ರೀ ಕ್ಷೇತ್ರದಲ್ಲಿರುವ ಕಲ್ಯಾಣಿಯಲ್ಲಿ ಮೂರು ಬಾರಿ ಸ್ನಾನ ಮಾಡಿದರೆ ಚರ್ಮ ಸಂಬಂಧಿತ ಕಾಯಿಲೆಗಳು ನಿವಾರಣೆಯಾಗುತ್ತದೆ.
೩) ಹಾವು ಕಚ್ಚಿದ ವ್ಯಕ್ತಿಗಳಿಗಳು ತಕ್ಷಣ ಬಂದು ಈ ದೇವಾಲಯದಲ್ಲಿ ಪ್ರಸಾದವನ್ನು ಸ್ವೀಕರಿಸಿದರೆ ವಿಷವುನಾಶವಾಗುವುದು.
೪) ಮಕ್ಕಳಾಗದ ದಂಪತಿಗಳಿಗೆ ಶ್ರೀಕ್ಷೇತ್ರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರೆ ಮಕ್ಕಳಾಗುವ ಯೋಗ್ಯ ಬರುತ್ತದೆ.
೫) ನಾಗರ ದೋಷ ಇದ್ದರೆ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರೆ ನಾಗರ ದೋಷ ನಿವಾರಣೆ ಆಗುತ್ತದೆ.
Место расположения
Sasalu находится в середине пути от Kikkeri к Шраванабелаголу . [1]
Демография
По данным переписи 2011 года, в Сасалу проживает 1310 человек. В селе 285 дворов. Общая площадь поселка 304 га. [2]
Пин-код
В селе есть почта, почтовый индекс 571423. [3]
Основные достопримечательности
В Сасалу есть два храма Шивы: Сомешвара и Шамбхулингешвара. Храм Сомешвара находится прямо в центре деревни, а храм Шамбхулинешвара расположен примерно в 1 км к востоку от деревни среди зеленых сельскохозяйственных угодий. Дорожка среди зелени ко второму храму - это уже само по себе незабываемое впечатление. Рядом со вторым храмом находится школа. Вся местность очень тихая и фотогеничная.
Другие храмы в деревне включают храм шри кудуремандамма, храм шри байрараджешвар, храм шри басавешвара, храм шри марамма, храм шри каиласа басава и храм шри сингамма. [ необходима цитата ]
Экономика
В селе аграрное хозяйство. В селе есть филиал банка Виджая.
Смотрите также
Рекомендации
4. https://www.facebook.com/shreekshetrasasalu/